ಒಬ್ಬ ಅಂಕಿತ್ ಶರ್ಮಾ
ಒಬ್ಬಳು ಅಕ್ಬರಿ ಸಲಾಮಿ
ಸುಟ್ಟು ಬೂದಿಯಾದರು
ಯಾವುದೋ ಅವರಿಗರಿವಿಲ್ಲದ
ಸ್ವಾರ್ಥದ ಕುತಂತ್ರದ ದಗೆ-ಹೊಗೆಯಲಿ
ರಾಜಕೀಯದ ಪಗಡೆಯಾಟದಲಿ
ಜೀವಂತ ಕಾಯಿಗಳು ಜನ ಸಾಮಾನ್ಯರು
ಯಾರದೋ ಅಧಿಕಾರದ ದಾಹದಲಿ
ಕರಗಿ ಹೋದರು ಕರ ಪಾವತಿದಾರರು
ಬಲಿಯಾದರು ಮುಗ್ಧರು
ಒಬ್ಬಳು ಅಕ್ಬರಿ ಸಲಾಮಿ
ಒಬ್ಬ ಅಂಕಿತ್ ಶರ್ಮಾ
ಹರಕೆಯ ಕುರಿಗಳಾದರು
ನರಿಗಳ ಬೇಟೆಯಾಟದಲಿ
ಬೇರಿಲ್ಲದ ತತ್ವಗಳ ಎಳೆದಾಟದಲಿ
ಆದರೆ ನೆನಪಿರಲಿ!
ಉರಿಯುತ್ತಿರುವ ಬೆಂಕಿಯ ನಡುವೆ
ಇನ್ನೂ ಎದೆಯಲ್ಲಿ ಬೆಳಗುತ್ತಿಹುದು
ಮಾನವೀಯತೆಯ ದೀಪ
ಶಾಂತಿ-ಪ್ರೀತಿಯ ಮುಂದೆ ನಿಲ್ಲಲಾರದು
ಹಿಂಸೆ, ಕೋಪ-ತಾಪ!

Comments

Popular posts from this blog

ಓ ನನ್ನ ಕಂದ

ನೀ ಇರಲು ಜೊತೆಯಲ್ಲಿ